ಹೊಲೆಯನೂ, ಕೃಥಾರ್ಥ ಕೆರವೂ
ಬಸ್ಟಾಂಡಿನ ಮುಂದೆ
ತ್ಯಾಪೆ ಹಚ್ಚಿದ ಛತ್ರಿಯಡಿ
ಕೆರ ಹೊಲೆಯುತಿದ್ದವನ
ಮೈಯೊಳಗೆ ಮೂರು ಪಾವು
ಮಾಂಸವಿಲ್ಲ,
ಸೂಳೆ ಮನೆಯಲಿ
ದಣಿದುದಕೋ ಏನೋ
ಬೆವರಿಳಿದೂ ಇಳಿದು
ಮೈ ಉಪ್ಪಡರಿದೆ,
ಕಣ್ಣೊಳಗಿನ ಪಿಚ್ಚು
ಅಲ್ಲಿದ್ದ ಕೆರಗಳನ್ನೇ ದುರುಗುಟ್ಟಿಕೊಂಡು
ನೋಡುತಿತ್ತು.
ಎಣ್ಣೆ ಕಾಣದೇ
ಕೂದಲು ಒಂದಕ್ಕೊಂದು ಅಂಟಿದ್ದವು
ನಾಯಿಗಳ ರತಿ ಕ್ರೀಡೆಯಂತೆ,
ಬ್ರಾಹ್ಮಣರ, ಲಿಂಗಾಯತ, ಐನಾರಪ್ಪನ, ಊರ ಗೌಡನ
ಕೆರಗಳೆಲ್ಲಾ ತಲೆ ಬಗ್ಗಿಸಿಕೊಂಡು
ಹೊಲೆಯನ ಮುಂದೆ ಕೂತಿವೆ,
ಅವೆಲ್ಲಾ ಮೇಲ್ಜಾತಿಯವರವಂತೆ
ಈತ ತನ್ನ ಕಾಲಡಿಯಲ್ಲಿ ಮೆಟ್ಟಿ
ಕಸುವಿಕ್ಕಿ ಹೊಲಿಯುತಿದ್ದಾನೆ,
ಬ್ರಾಹ್ಮಣನ ಜನಿವಾರ
ಹೊಲೆಯನ ಕೆರ ಹೊಲೆವ
ಸೂಜಿಯಲಿ ನುಸುಳಿತ್ತು,
ಒಂದು ಹೊಲಿಗೆಗೆ ಒಮ್ಮೆ
ಬಾಯ ಉಗುಳಿನ ಸ್ನಾನ ಮಾಡಿಸುತಿದ್ದಾನೆ
ಮಡಿ-ಮೈಲಿಗೆಯೆಲ್ಲ ಕೊಚ್ಚಿ ಹೋಗುವ ಹಾಗೆ.
ಒಬ್ಬೊಬ್ಬರೇ ಕೆರಗಳೋಯ್ಯುತಿದ್ದಾರೆ
ಜನಿವಾರ, ವೀಭೂತಿ, ಪೂಜೆ, ಅಧಿಕಾರಗಳೆಲ್ಲಾ
ಹೊಲೆಯನ ಉಗುಳಿಗೆ ಶುದ್ದವಾಗುತ್ತಿವೆ,
ತಲೆ ಬಗ್ಗಿಸಿ ಹೊಲೆಸಿಕೊಂಡ
ಕೆರಗಳೀಗ ನಿರಾಳ,
ತ್ಯಾಪೆ ಹಚ್ಚಿದ ಛತ್ರಿಯಡಿ
ಕೆರ ಹೊಲೆಯುತಿದ್ದವನ
ಮೈಯೊಳಗೆ ಮೂರು ಪಾವು
ಮಾಂಸವಿಲ್ಲ,
ಸೂಳೆ ಮನೆಯಲಿ
ದಣಿದುದಕೋ ಏನೋ
ಬೆವರಿಳಿದೂ ಇಳಿದು
ಮೈ ಉಪ್ಪಡರಿದೆ,
ಕಣ್ಣೊಳಗಿನ ಪಿಚ್ಚು
ಅಲ್ಲಿದ್ದ ಕೆರಗಳನ್ನೇ ದುರುಗುಟ್ಟಿಕೊಂಡು
ನೋಡುತಿತ್ತು.
ಎಣ್ಣೆ ಕಾಣದೇ
ಕೂದಲು ಒಂದಕ್ಕೊಂದು ಅಂಟಿದ್ದವು
ನಾಯಿಗಳ ರತಿ ಕ್ರೀಡೆಯಂತೆ,
ಬ್ರಾಹ್ಮಣರ, ಲಿಂಗಾಯತ, ಐನಾರಪ್ಪನ, ಊರ ಗೌಡನ
ಕೆರಗಳೆಲ್ಲಾ ತಲೆ ಬಗ್ಗಿಸಿಕೊಂಡು
ಹೊಲೆಯನ ಮುಂದೆ ಕೂತಿವೆ,
ಅವೆಲ್ಲಾ ಮೇಲ್ಜಾತಿಯವರವಂತೆ
ಈತ ತನ್ನ ಕಾಲಡಿಯಲ್ಲಿ ಮೆಟ್ಟಿ
ಕಸುವಿಕ್ಕಿ ಹೊಲಿಯುತಿದ್ದಾನೆ,
ಬ್ರಾಹ್ಮಣನ ಜನಿವಾರ
ಹೊಲೆಯನ ಕೆರ ಹೊಲೆವ
ಸೂಜಿಯಲಿ ನುಸುಳಿತ್ತು,
ಒಂದು ಹೊಲಿಗೆಗೆ ಒಮ್ಮೆ
ಬಾಯ ಉಗುಳಿನ ಸ್ನಾನ ಮಾಡಿಸುತಿದ್ದಾನೆ
ಮಡಿ-ಮೈಲಿಗೆಯೆಲ್ಲ ಕೊಚ್ಚಿ ಹೋಗುವ ಹಾಗೆ.
ಒಬ್ಬೊಬ್ಬರೇ ಕೆರಗಳೋಯ್ಯುತಿದ್ದಾರೆ
ಜನಿವಾರ, ವೀಭೂತಿ, ಪೂಜೆ, ಅಧಿಕಾರಗಳೆಲ್ಲಾ
ಹೊಲೆಯನ ಉಗುಳಿಗೆ ಶುದ್ದವಾಗುತ್ತಿವೆ,
ತಲೆ ಬಗ್ಗಿಸಿ ಹೊಲೆಸಿಕೊಂಡ
ಕೆರಗಳೀಗ ನಿರಾಳ,
Tumbaa chenaagide.. All the best fr more revolutionist thoughts.
ReplyDeletedhanyavadagalu
Deleteಉತ್ತಮವಾದ ಕವನ.
ReplyDelete