ಕವಿತೆಯೊಂದು ಬದುಕಿದೆ



ಕವಿತೆಯೊಂದು ಎದೆಯೊಳಿದ್ದು
ಏನನ್ನೊ ಮತ್ತೆ ಬರೆಸಿದೆ,
ಹಗಲು ರಾತ್ರಿ ದಣಿಸಿ ದಣಿಸಿ
ಮೈಯ ಬೆವರ ಸುರಿಸಿದೆ

ಒಂದು ಹಾಳೆ ನೂರು ಕವನ
ಸಾಲದಂತೆ ನಾಳೆಯು,
ಮಣ್ಣ ಗೋರಿಯಾಳವನ್ನು
ಸೀಳಿದಂತೆ ಬೀಜವು

ಅಳುವ ಜನರ ಕಣ್ಣಲೊಂದು
ಹನಿಯು ಕುಳಿತು ಇಣುಕಿದೆ,
ಒಣ ಮರದ ಬೇರ ಸೇರೊ
ಆಸೆಯಲ್ಲೆ ಕಾದಿದೆ

ನಾಳೆ ಕನಸ ಗಂಟಲಲ್ಲಿ
ಕವಿತೆಯೊಂದು ಬದುಕಿದೆ
ಸತ್ತ ಜಗಕೆ ಮೂಕ ಜನಕೆ
ದನಿಯ ಆಸೆ ಉಳಿಸಿದೆ
-ಪ್ರವರ




Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ