ನಡೆದ ಹಾದಿಯಗುಂಟ ಕಲ್ಲು ಮುಳ್ಳುಗಳದೇ ಕಾರುಬಾರು ಸುರಿಯುತಿಹ ರಕುತದ ಪರಿವೇ ಇಲ್ಲದೇ ಹಾಗೇ ನಡೆಯುತ್ತಿದ್ದಾನೆ, ನೋವಾಗಿ ಮುಖವ ಕಿವುಚಲಿಲ್ಲ ಹಸನ್ಮುಖಿಯಾಗಿ ಸುಮ್ಮನೇ ಚಲಿಸುತಿದ್ದಾನೆ, ಗಾಳಿ ಗಮಲಿನಂತೆ. ಎಲ್ಲೆಗಳನೆಲ್ಲಾ ಮೀರಿ ಎಲ್ಲಿಂದೆಲ್ಲಿಗೋ ಚಲಿಸುತಿದ್ದಾನೆ ನದಿಯಂತೆ, ಜಗದ ಕ್ರೂರತನದ ಕಾವಿಗೆ ಕರಗಿ ಹರಿಯುತಿದ್ದಾನೆ, ಬರೀ ಕತ್ತಲೆಯೇ ತುಂಬಿ ಜೀ ಗುಡುವಾಗ ಮೇಣವಾಗಿ ಬೆಳಕಿತ್ತು ಜಿನುಗುತಿದ್ದಾನೆ, ನಾನು ನಾನೆಂಬ ಅಹಂಗಳೇ ತಾಂಡವವಾಡುವಾಗ ಅವುಗಳ ಮುಖವಾಡ ಬಣ್ಣದ ಬಟ್ಟೆಗಳನೆಲ್ಲ್ಲಾಕಳಚಿ ನಗ್ನವಾಗಿಸಿದ್ದಾನೆ, ಕ್ರೌರ್ಯತನದ ಕಸವ ಗುಡಿಸೊ ಕೆಲಸದಲ್ಲಿ ಮಗ್ನನಾಗಿದ್ದಾನೆ, ಇನ್ನೂ ನಮ್ಮೊಳಗೆ ಸಣ್ಣಗಿನ ದೀಪದಂತಿದಾನೆ ಹುಡುಕಬೇಕಷ್ಟೇ ನಾವು ನಮ್ಮೊಳಗೆ ಆತನನ್ನು, ನಮ್ಮ ಮನಸಂತಿದ್ದಾನೆ
( ಕಾಲೇಜು ನನ್ನ ಜೀವನದಲ್ಲಿ ಹತ್ತಾರು ಬದಲಾವಣೆಗಳನ್ನ ಹಾಗು ಹೀಗೆ ಬದುಕಬೇಕೆಂಬ , ಪ್ರೀತಿ ಎಂದರೆ ಹೀಗೆ , ಸ್ನೇಹಿತರೆಂದರೆ ಹೀಗೆಂಬ ಪಾಠಗಳ ಹೇಳಿಕೊಟ್ಟು ಗುರು , ನನ್ನ ಮನಸಲ್ಲಿ ಪ್ರೀತಿ - ಪ್ರೇಮಗಳ ಪದಗಳ ಹುಡುಕಾಟ ನಡೆಸಿದ ನೆನಪುಗಳನ್ನು ಹಾಗೂ ಆ ನೆನಪುಗಳ ಬೀಜಗಳ ಬಿತ್ತಿದವರ ಪಾತ್ರ ಎಲ್ಲವನ್ನು ನಿಮ್ಮೆದುರಿಗಿಡುವ ಕಸರತ್ತು ಅಷ್ಟೆ ಹಾಗೂ ........ ) ಸ್ಕೂಲಿನಲ್ಲಿ ಮಕ್ಕಳು ಮಕ್ಕಳೆಂದೇ ನಮಗೆ ಮಕ್ಕಳ ಪಟ್ಟ ಕಟ್ಟಿದ್ದರು , ಕಾಲೇಜಿಗೆ ಸೇರಿಕೊಂಡು ದೊಡ್ಡವರಾಗಬೇಕೆಂದು ಪ್ರತಿಘ್ನೆ ಮಾಡಿದ್ದೆವು . ಕಾಲೇಜಿಗೆ ವಿಜ್ನಾನ ವಿಷಯದಲ್ಲಿ ಪ್ರವೇಶ ಪಡೆದಾದ ಮೇಲೆ ಕ್ಲಾಸಿಗೆ ಹೋಗುವ ಅ ಸುದಿನ ಬಂದಿತ್ತು . ಅಮ್ಮ ಯುದ್ಧಕ್ಕೆ ಹೊರಟುನಿಂತ ಸೈನಿಕನಿಗೆ ಆಶಿರ್ವದಿಸುವಂತೆ ಮುಖಕ್ಕೆ ಮಂಗಳಾರತಿ ಎತ್ತಿ ಹೊಸ ಪೆನ್ನನ್ನು ಜೇಬಿನಲ್ಲಿಟ್ಟು ಹೋಗಿಬಾ ಎಂದು , ಕಾಲೇಜಿನಲ್ಲಿ ಯಾರ ಜೊತೆಗೂ ಜಗಳವಾಡಬಾರದೆಂದು ಹೇಳಿ ಗೇಟಿನವರೆಗೂ ಬಂದು ಒಮ್ಮೆ ದೃಷ್ಟಿ ತೆಗೆದು ಹಾಕಿದರು , ಅಪ್ಪ ಐವತ್ತು ರೂಪಾಯಿ ಜೇಬಿನಲ್ಲಿ ತುರುಕಿ ಚೆನ್ನಗಿ ಓದು ಎಂದು ಹೇಳಿದರಾದರೂ ನನ್ನ ಓದಿನ ಸಲುವಾಗಿ ಅವರ ಮನಸಲ್ಲಿ ಕೊಂಚ ದುಗುಡವಿತ್ತು . ನಾನು ಹೊಸಬಟ್ಟೆಗಳ ತೊಟ್ಟು ಕೊಂಚ ಖುಷಿ ಕೊಂಚ ಭಯದಿಂದ ಹೊರಟು ನಿಂತೆ . ದಾರಿಯುದ್ದಕ್ಕೂ ಏನೇನೋ ಯೋಚನೆಗಳು...
ಮನೇಲಿ ಕೂತು ಕೂತು ಬೇಜಾರಾಗಿ ಸಂಜೆ ಹೊತ್ತು ಜೋಳದ ಕೂಡ್ಲಿಗಿ ಟಾರು ರೋಡುನಗುಂಟ ಹೊರಟೆ. ದೂರದೂರಿಂದ ಬಂದಿದ್ದ ಮೋಡಗಳೆಲ್ಲಾ ಒಂದಕ್ಕೊಂದು ಆಲಿಂಗನ ಮಾಡಿಕೊಂಡು ಸ್ವಾಗತಿಸುತಿದ್ದವು. ಸೂರ್ಯ ಒಬ್ಬನೇ ಅಲ್ಲೆಲ್ಲೋ ಕದ್ದು ಕೂತು ಇಣುಕುತಿದ್ದ. ನಾಲ್ಕೈದು ದಿನಗಳ ಮಳೆಗೆ ನೆಲ ಮೇಲೆಲ್ಲ ಹಸಿರು ಹಾಸಿತ್ತು, ಪಳುವಕ್ಕನ ಗುಂಡಿಯಲ್ಲಿ ತುಂಬಿದ್ದ ನೀರಲ್ಲಿ ಎಮ್ಮೆಗಳು ಆರಾಮಾಗಿ ಸುಖಿಸುತ್ತಿದ್ದವು. ಈರಯ್ಯಜ್ಜ ಅಲ್ಲೇ ಮರದಡಿಯ ಕಲ್ಲಿನ ಮೇಲೆ ಅಂಡಚ್ಚಿ ಗಣೇಶ ಬೀಡಿ ಸೇದಿ ಬುಸ್ಸೆಂದು ಹೊಗೆ ಬಿಡುತ್ತಿದ್ದ ಹಾಗೆ ಚಳಿಯ ಪರಿಗೆ ಕೈ ಹಾಕಿ ದೇಹದ ಭಾಗಗಳನೆಲ್ಲಾ ತುರಿಸಿಕೊಂಡು ಹಾ ಹಾ ಹಾಅ~~~ ಎನ್ನುತ್ತಾ ಸದ್ದೊರಡಿಸುತ್ತಿದ್ದ. ಆತನೆಡೆಗೊಂದು ಲುಕ್ಕು ಕೊಟ್ಟು ಹೊರಟೆ, ಆತ ಮಾತ್ರ ಫಳ್ಳೆಂದು ಹಲ್ಲಿಲ್ಲದ ಬಾಯ ತೆಗೆದು ನಕ್ಕೇಬಿಟ್ಟ. ಮುಂದೆ ಹೋಗುತ್ತಲೇ ಸಂಕಮ್ಮಜ್ಜಿ ಕಟ್ಟಿಗೆಗಳ ಹೊರೆ ತಲೆ ಮೇಲೆ ಎತ್ತಿಟ್ಟುಕೊಳ್ಳಲು ಕಷ್ಟಪಡುತಿತ್ತು, ಸ್ವಲ್ಪ ಹೊರೆಯ ಎತ್ತಿ ತಲೆ ಮೇಲಿಟ್ಟೆ, ಕೆಳಗಿದ್ದ ಬುತ್ತಿಗಂಟನ್ನು ಕೈಯಾಗ ಕೊಡು ಅಂತು ಕೊಟ್ಟೆ, ನಸ್ಯಾಪುಡಿಗೆ ಕಪ್ಪಗಿದ್ದ ಹಲ್ಲು ಬಿಟ್ಟು ನಗು ಬೀರಿತು ಮುದುಕಿ. ಊರಿಂದ ತುಸು ದೂರ ಬಂದವನೇ ಸುಮ್ಮನೆ ಸೇಂಗಾ ಹಾಕಿದ್ದ ಹೊಲದ್ದಲ್ಲಿ ಕೂತೆ. ಸಣ್ಣಗೆ ಬೆಳಕು ಕರಗುತಲಿತ್ತು, ಕಾಡುಗತ್ತಲು ತುಂಬಿದ್ದ ಮನಸ್ಸಲ್ಯಾರೋ ಲಾಟ...
Comments
Post a Comment
ಅನ್ಸಿದ್ ಬರೀರಿ