ಧರ್ಮವೆಂಬ ಸಮರ


ಧರ್ಮ ಧರ್ಮದಿ ಸಮರ ನಡೆದು
ಮುಗುದ ಜನಗಳ ಜೀವ ಕಳೆದು
ಮಾನವೀಯತೆ ಇಲ್ಲವೆಂದು
ತಿಳಿದು ಬೇಸರವಾಗಿದೆ

ನನ್ನ ಜಾತಿ ನನ್ನ ಮತವು
ಎಂಬ ಸ್ವಾರ್ಥದಿ ಮಾನವ
ನಮ್ಮ್ ನಾಡು ನಮ್ಮ ದೇಶ
ಎಂಬುದನ್ನೇ ಮರೆತಿಹ

ಬಾಂಬು ಗನ್ನುಗಳನ್ನು ಹಿಡಿದು
ಧರ್ಮ ರಕ್ಷಿಸುವೆಂದು ಹೊರಟು
ಶಾಂತಿಯನ್ನೇ ಕೊಂಡು ಬಂದು
ನಾನೇ ಧೀರ ಎನುತಿಹ

ತನ್ನ ತಾಯಿಯ ಹೊಟ್ಟೆಯನ್ನು
ಕ್ರೂರ ತನದಿ ಅಗೆದು-ಬಗೆದು
ಕರುಳ ಹಿಂದಿ ನೋವ ಕೊಟ್ಟು
ದುಷ್ಟ ನಗುವ ನಗುತಿಹ

ಯಾವುದಯ್ಯ ನಿನ್ನ ಕುಲವು
ಯಾವುದಯ್ಯ ನಿನ್ನ ಮತವು
ಭಾರತಾಂಬೆಯು ನಮ್ಮ ತಾಯಿಯು
ನಾವು ಅವಳ ಮಕ್ಕಳು............

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ