Posts

ನನ್ನ ಜಿಲ್ಲೆಯ ಕತೆ

Image
ಹಚ್ಚ ಹಸಿರಿತ್ತು , ಬೆಟ್ಟಗಳ ಸಾಲಿತ್ತು ಅಲ್ಲಲ್ಲಿ ಹರಿದಿದ್ದ ಝಾರಿಯಿದ್ದವು ಕಲ್ಲೆದೆಯ ಮೇಲೆ ಹಸಿರುಟ್ಟ ಚಿಗುರಿದ್ದವು ಮಳೆ ಬಂದ ಮಾರನೆಯ ದಿನ ಮಣ್ಣಿನ ಘಮವಿತ್ತು , ಮರದ ಕೊಂಬೆಗಳ ಮೇಲೆ ಹಕ್ಕಿ ಗಳ ಗೂಡಿದ್ದವು ಅದರೊಳಗೆ ಹಕ್ಕಿ ಮರಿಯಿದ್ದವು , ಕಾಡೆಲ್ಲ ಅಲೆದಾಡಿ ಹುಲ್ಲ ಮೆಯುತಲಿದ್ದ ಜಿಂಕೆ ಗುಂಪಿ ದ್ದವು , ಪ್ರತಿಯ ಎಲೆ ಎಳೆಯಲ್ಲೂ ಬಾಳ ಕನಸಿದ್ದವು .... ಎಲ್ಲವೂ ಧೂಳಾಗಿವೆ , ಕೆಂಪು ಹುಡಿಯಾಗಿವೆ ಅದುರು ಅದುರೆಂಬ ಶಬ್ದಗಳೇ ತೆಲಾಡಿವೆ ... ಡೈನ ಮೇಟಿನ ಸ್ಪೋ ಟಕೆ ಚೂರು ಚೂರಾಗಿರುವ ಕಲ್ಲುಗಳಿವೆ , ರಾಕ್ಷಸಾಕಾರದ ಬುಲ್ದೊಜರು ಗಳಿವೆ , ಕೆಮ್ಮಣ್ಣು ಮೆತ್ತಿದ ಬಡ ಜನಗಳಿ ದ್ದಾರೆ ಬಟ್ಟ ಬಯಲಿದೆ , ಕೆಟ್ಟ ಬಿಸಿಲಿದೆ ಬಿಳಿಯ ಬಟ್ಟೆ ಯ ನು ಟ್ಟ ಗಣಿ ದಣಿ ಗ ಳಿ ದ್ದಾರೆ ಕಣ್ತೆರೆದು ನೋಡಲು ಏನು ಉ ಳಿದಿಲ್ಲ ನೋಡ ಹೋದರೆ ಬರಿ ಧೂಳು ಇದುವೇ ನನ್ನ ನಾಡಿನ ಗೋಳು

ಬಾಳು ಹೀಗೂ ಇದೆ

Image
ತಿಂಗಳ ಹಸುಗೂಸು ಕಂಕುಳಲ್ಲೇ ಇದೆ ಅಳುತ್ತಲಿದೆ ಹರಿದ ಹಳೆಯ ಸೀರೆಯಲ್ಲಿ ಮಗುವ ಕಟ್ಟಿಕೊಂಡಿದ್ದಾಳೆ, ಹಸಿವಾಗಿರಬೇಕು, ಜಲ್ಲಿ ಕಲ್ಲುಗಳ ಹೋರುತಿದ್ದಾಳೆ ಅದರಮ್ಮ.... ಅಪ್ಪ ಎಲ್ಲೋ ಕುಡಿದುಕೊಂಡು ಮೋರೆಯಲ್ಲೆಲ್ಲೋ ಬಿದ್ದಿರಬೇಕು ಮಗುವಿನ ಅಳು ಅವನಿಗೆ ಕೇಳುತಿಲ್ಲ... ಹೆತ್ತವಳಿಗೆ ಕೇಳುತ್ತಿದೆ ಆದರೆ ಮೊಲೆಯಲ್ಲಿ ತೊಟ್ಟು ಹಾಲಿಲ್ಲ.... ಬಿಸಿಲಲ್ಲಿ ಭಾರದ ಪುಟ್ಟಿ ಹೊತ್ತು ಹೊತ್ತು ಬತ್ತಿಹೋಗಿದೆ... ಹಾಗೆಯೆ ಬಾಳಬೇಕೆಂಬ ಕನಸುಗಳು ಬತ್ತಿ ಹೋಗಿವೆ ಮಗು ಇನ್ನೂ ಅಳುತ್ತಲೇ ಇದೆ ಸುಮ್ಮನಿರಿಸಲು ಇನ್ನೇನು ಮಾಡಿಯಾಳು.... ಅದರ ಹಸಿವಿನ ಅಳು ಕೇಳದಿರಲೆಂದು ಬಾಯ ಗಟ್ಟಿಗಾಗಿ ಮುಚ್ಚಿದ್ದಾಳೆ..... ಅವಳಂತೆ ಪೂರ್ತಿಯಾಗಿ ಅಳು ನಿಲ್ಲಿಸಿತ್ತು ನಿಟ್ಟುಸಿರ ಬಿಡುತ್ತಾ ಮಗುವ ನೋಡಲು ಉಸಿರೇ ನಿಲ್ಲಿಸಿತ್ತು.... ಅಲ್ಲಿಗೆ ಅದರ ಹೊಟ್ಟೆ ತುಂಬಿಸಲಾರದಿದ್ದರೂ ಹೆತ್ತ ತಪ್ಪಿಗೆ ಅಳುವ ಸರದಿ ಅವಳದ್ದಾಗಿತ್ತು....

"ನಾನು ಕಟ್ಟಿದ ಕವಿತೆ"

Image
ಅಂಗಿ ಜೇಬಿನಲಿ ಮೆತ್ತಗಾಗಿ ಹರಿದ ಹತ್ತರ ನೋಟಿನಂತೆ ಕೂತಲ್ಲೇ ಕೂತಿದೆ, ಮನೆಯ ಕೋಣೆಯಿ ಮೂಲೆಯಲಿ ಕಡ್ಡಿ ಕಿತ್ತಿದ್ದರೂ ಕಸ ಗುಡಿಸುತ್ತಿರುವ ಪೊರಕೆಯಂತೆ ನನ್ನ ಕವಿತೆ ಮರದ ಕೊಂಬೆಯಲಿ ಸಾಕು ಸಾಕಾಗಿ ಕೂತು ಉದುರಿದ ಓಣಗಿದೆಲೆಯಂತಿದೆ, ನಮ್ಮ ಮನೆಯ ಮುಂದೆ ಐದಾರು ದಶಕಗಳಿಂದ ಬೀದಿ ದೀಪ ಹೊತ್ತು ನಿಂತಿದ್ದ ತುಕ್ಕಿಡಿದ ಕಂಬದಂತಿದೆ ನನ್ನ ಕವಿತೆ. ’ ನಮ್ಮೂರ ಬಜಾರದಲ್ಲಿ ಮೂಟೆ ಹೋರುತಿದ್ದ ಹಮಾಲಿ ದುರುಗಪ್ಪನ ಹರಿದರೂ ಮೈ ಮುಚ್ಚುತಿಹ ಅಂಗಿಯಂತಿದೆ, ಎದುರು ಮನೆಯಜ್ಜನ ಕಾಲಲ್ಲಿ ಸವೆದು ಹರಿದರೂ ಹೊಳಪು ಕಳೆಕೊಳ್ಳದ ಚರ್ಮದ ಚಪ್ಪಲಿಯಂತಿದೆ ನನ್ನ ಕವಿತೆ ನಾನು ಕಟ್ಟಿದ ಕವಿತೆ ನನ್ನ ಜನರಂತೆ ಕಪ್ಪಗಿರಬಹುದು, ಮೃದು ಮನಸ ಸವಿತೆ.....

ಅವಳಿಲ್ಲದಿದ್ದರೂ

Image
(ಸಂಜೆ ಹೊತ್ತು ಹೊರಗಡೆ ಬೇಜಾರಿನಿಂದ ಕೂತಿದ್ದೆ, ನೋಡು ನೋಡುತಿದ್ದಂತೆ ಮಳೆರಾಯ ಆಗಮಿಸಿದ... ಮೈಯೆಲ್ಲ ನೀರು ಚಳಿಯಗುತಿತ್ತು ಆಗ ನನಗನ್ನಿಸಿದ್ದು) ಮತ್ತೆ ಮತ್ತೆ ನೆನೆಯುವಾಸೆ ಸುರಿಯೊ ತುಂತುರು ಮಳೆಯಲಿ ಅವಳ ನೆನಪಲಿ ಮಿಂದು ಬಂದ ಮನಸು ಕೊಂಚ ನೆನೆಯಲಿ ಹನಿ ಹನಿಗಳಲ್ಲೂ ಅವಳ ಮಾತು ಕೇಳುತಿಹವು ಕಿವಿಗಳು ಗೆಜ್ಜೆ ಸದ್ದನು ಬೀರುತಿಹವು ಎಲೆಯ ಮೇಲೆ ಬಿದ್ದ ಹನಿಗಳು ನನ್ನ ದೇಹವು ತೋಯುತಿರಲು ಅವಳ ಅಪ್ಪುಗೆ ಬಯಸಿದೆ ಕೆನ್ನೆ ಮೇಲಿಹ ತಂಪು ಹನಿಗಳು ಅವಳು ಇತ್ತ ಮುತ್ತಿನಂತಿದೆ ಅವಳಿಲ್ಲ ಜೊತೆಯಲ್ಲಿ ಆದರೂ ಜೊತೆ ಇರುವಂತಿದೆ ಸುತ್ತಲೂ ಘಾಡ ಮೌನವಿದ್ದರೂ ಅವಳು ಮಾತನಾಡಿದಂತಿದೆ

ಪಿಸುಮಾತು

Image
ಜಿನುಗುಡುವ ಮಳೆಯಲ್ಲಿ ಪಿಸುಗುಡುತಿದ್ದಾರೆ ಪ್ರೇಮಿಗಳು ತಮ್ಮ ಮಾತು ತಮಗೂ ಕೇಳದಂತೆ. ಅವಳು ತನ್ನೊಡನೆ ತಂದಿದ್ದ ಕೊಡೆಯು ಮುದುರಿಕೊಂಡು ಕೂತಿದೆ ಅವರ ಪಕ್ಕದಲ್ಲಿ ಅವರಂತೆ ನೆನೆದುಕೊಂಡು ಮಳೆಯಲ್ಲಿ ನಡುಗುತ್ತಿದೆ. ಮಳೆ ಹನಿಗಳೆಲ್ಲವು ಜಾರುವಾಟವಾಡುತಿವೆ ಅವಳ ತಲೆಗೂದಲುಗಳ ಮೇಲೆ ಯಾವುದರ ಪರಿವೇ ಇಲ್ಲ ತನ್ನಿನಿಯನ ಭುಜಕೆ ತಲೆಯಾನಿಸಿ ಪಿಸುಗುಡುತ್ತಿದ್ದಾಳೆ ಹಾಗೆ ತನ್ನ ಮಾತು ತನಗೂ ಕೇಳಿಸದಂತೆ

ಹಸಿವೆಂಬ ಕ್ರೂರಿ

Image
ನಾನು ಸದ್ಯ MCA ಮಾಡುತ್ತಾ ಹಾಸ್ಟೇಲಿನಲ್ಲಿದ್ದೇನೆ. ಸಂಜೆ ಗೆಳೆಯನ ಜೊತೆ ಕೆಲವು ಸಾಮಾನುಗಳನ್ನು ತರಲಿಕ್ಕೆ ಅಂತಾ ಹೊರಗಡೆ ಹೊಗಿದ್ದೆ. ಹಾಸ್ಟೇಲಿಗೆ ವಾಪಾಸ್ ಆಗಬೇಕಾದ್ರೆ ಹಿಂದಿ ಮಾತನಾಡುವ ಹುಡುಗ ಬಂದು "ಭೈಯ ಆಪ್ಕೊ ಹಿಂದಿ ಆತಾಹೆ ಕ್ಯಾ" ಎಂದ ಅದಕ್ಕೆ ಹಾ! ಎಂದೆ.... ಅವನು ಹಿಂದುಗಡೆ ತಾಯಿ ಅಳುತ್ತಿರೊ ಮಗುವನ್ನು ತೋರಿಸಿ "ಭೈಯ್ಯ ಸುಭಾ ಸೇ ಹಮ್ ಬುಕೆ ಹೈ(ಬೆಳಗ್ಗೆಯಿಂದ ಉಪವಾಸವಿದ್ದೀವಿ), ಕುಚ್ ತೊ ಖಾನೆ ಕೇ ಲಿಯೆ ಬೇಜಿಯೆ(ತಿನ್ನೋಕೇನಾದ್ರು ಕೊಡಿಸಿ) " ಅಂತಾ ಕೇಳಿದ, ಒಂದು ಕ್ಷಣ ಮನಸ್ಸು ತಲ್ಲಣವಾಯ್ತು.... ಜೊತೆಗಿದ್ದ ಗೆಳೆಯ "ಲೇ ಇವೆಲ್ಲಾ ಬೆಂಗಳೂರಲ್ಲಿ ಇದ್ದದ್ದೇ ಬಾ.." ಎಂದು ಕೈ ಹಿಡಿದುಕೊಂಡು ಎಳೆದುಕೊಂಡು ಹೋದ.... ರೂಮಿಗೆ ಬಂದೆ, ಊಟಕ್ಕೆ ಸೀಟಿ ಹಾಕಿದರು, ತಟ್ಟೆ ತೊಳೆದು ಊಟಕ್ಕೆ ಕೂತೆ ಅನ್ನ ಗಂಟಲಲ್ಲಿ ಇಳಿಯುವುದಕ್ಕೆ ಇಳಿಯುವುದಕ್ಕೆ ಹೆಣಗಾಡುತಿತ್ತು. ಅಲ್ಪ ಸ್ವಲ್ಪ ಊಟ ಮಾಡಿ ಕೈ ತೊಳೆದುಕೊಳ್ಳೋಕೆ ಹೋದೆ ಅಲ್ಲಿ ಡ್ರಮ್ಮಿನಲ್ಲಿ ಹೆಚ್ಚಾಗಿ ಸುರಿದ ಅನ್ನ ಕಂಡೆ. ರೂಮಿಗೆ ಹೋಗಿ ಮಂಕು ಹಿಡಿದವನಂತೆ ಕೂತೆ ಒಂದು ಕಡೆ ಹಸಿದ ಹೊಟ್ಟೆಗೆ ಅನ್ನವಿಲ್ಲದೆ ಬೇಡುವ ಜನ ಒಂದು ಕಡೆಯಾದರೆ, ಅನ್ನ ಹೆಚ್ಚಾಯಿತೆಂದು ಸುರಿಯವ ಜನರೊಂದು ಕಡೆ. ಕಡೇ ಪಕ್ಷ ಆ ಹುಡುಗನಿಗೆ ಒಂದು ಬಿಸ್ಕತ್ತು ಪ್ಯಾಕೇಟು ಕೊಡಿಸಲಾಗಲಿಲ್ಲಾ ಅನ್ನೋ ಪಾಪ ಪ್ರಜ್ನೆ ಕಾಡತೊಡಗಿತ್ತು, "ಅನ್ನದಾನಕ್ಕಿಂತ ಇನ್ನು ದಾನವ...

ಯೋಧ

Image
ಮೊನ್ನೆಯಷ್ಟೆ ಮದುವೆಯಗಿದ್ದ ಆಗಲೇ ಗಡಿಯಲ್ಲಿ ಕಾವಲಿಗೆ ಕರೆಬಂದಿದೆ ದೇಶ ಸೇವೆಗೆ ಹೋಗಲೇಬೇಕು ಹೆಂಡತಿಯ ಕೆನ್ನೆಯ ಮೇಲಿನ ಅರಿಸಿಣದ ರಂಗಿನ್ನು ಅಳಿಸಿಲ್ಲ ಮಧು ಮಂಚದ ಮೇಲಿರುವ ಹೂವಿನ್ನು ಬಾಡಿಲ್ಲ ಇಬ್ಬರ ಮನದಲ್ಲೂ ದುಗುಡ ಬಟ್ಟೆ-ಬರೆಗಳೆಲ್ಲಾ ಬ್ಯಾಗಿನಲಿ ತುಂಬಿ ದೇವರಿಗೆ ಕೈ ಮುಗಿದು ಹೊರದುತಿಹನು ಹೆಂಡತಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಮನದಲ್ಲಿ ಭಯ ತುಂಬಿಕೊಂಡು ಕೈ ಬೀಸುತಿಹಳು.... ಅವನು ಓಡಿ ಬಂದವನೇ ಕವಳನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಕ್ಕಿದ ಮತ್ತೆ ಬರುವೆನೆಂದು..... ಒಳ ನುಸುಳುತಿಹ ಉಗ್ರರನು ತಡೆಯಲು ಜೀವದಾಸೆಯ ತ್ಯಜಿಸಿ ದೇವರನು ಮನದೊಳಗೆ ನೆನೆಸಿ ಬಂದೂಕನು ಹಿಡಿದು ಹೊರಟೇ ಹೊರಟ.... ಗುಂಡಿನ ಮೇಲೆ ಉಗ್ರರ ಹೆಸರು ಬರೆದಿರುವಂತೆ ಅವರೆಲ್ಲರ ಎದೆಗಳ ಸೀಳುತ ಭೋರ್ಗರೆದವು... ರೌದ್ರತೆ ಆಕಾಶದೆತ್ತರಕೆದ್ದಿತ್ತು ಶಾಂತಿ ನೆಲ ಕಚ್ಚಿತ್ತು ಸ್ವಲ್ಪ ಹೊತ್ತಿನಲ್ಲೇ ಎಲ್ಲಿಂದಲೋ ಬಂದ ಗುಂಡು ಎಡ ಎದೆಯ ಹೊಕ್ಕಿತ್ತು ದೇಹ ನೆಲವನರಸಿತ್ತು "ಮೇರಾ ಭಾರತ್ ಮಹಾನ್" ಎಂಬ ದ್ವನಿ ಹೊರಡಿಸಿತು ಬಾಯಿ ಕಣ್ ಗಳಲಿ ತನಗಾಗಿ ಕಾಯುತಿಹ ಹೆಂಡತಿಯ ಚಿತ್ರವಷ್ಟೇ ಜೀವ ದೇಹವ ಬಿಟ್ಟಾಗಲೂ ಮನಸು ತುಡಿಯುತಲೇ ಇತ್ತು........